Clickable Image

Thursday, November 30, 2023

ಸಮಾನ ಸಮಾಜಕ್ಕಾಗಿ ಶ್ರಮಿಸಿದವರು ಕನಕದಾಸರು* ‍‌‌‌ ಶಾಸಕ ಅಲ್ಲಮ ಪಾಟೀಲ



ಕಲಬುರಗಿ : ನ.೩೦ (ಕ.ವಾ)ಸಮ ಸಮಾಜ ನಿರ್ಮಾಣಕ್ಕೆ ಕನಕನ ತತ್ವಾದರ್ಶ ಅಗತ್ಯವಾಗಿದ್ದು ನಮ್ಮ ಜೀವನದಲ್ಲಿ ಕನಕದಾಸರ ಸಂದೇಶಗಳು ಅಳವಡಿಸಿಕೊಳ್ಳಬೇಕು ವಿಧಾನ ಸಭಾ ಸದಸ್ಯ ಅಲ್ಲಮಪ್ರಭು ಪಾಟೀಲ ಹೇಳಿದರು.



 ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಪಂ ಆಶ್ರಯದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ನಡೆದ ೫೩೬ನೇ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು


ಕನಕದಾಸರು ಒಂದು ಜಾತಿಗೆ ಸೀಮಿತವಾದವರಲ್ಲ, ಇಡೀ ಮನುಕುಲದ ಉದ್ಧಾರಕ್ಕೆ ಶ್ರಮಿಸಿದವರು. ನಾವು ಸೇವಿಸುವ ಅನ್ನ, ನೀರು, ಗಾಳಿಗೆ ಯಾವ ಜಾತಿಯ ಬಣ್ಣ ಇಲ್ಲ, ಹಾಗಾದರೆ, ಮನುಷ್ಯನಿಗೆ ಕುಲ ಉಂಟೆ? ಎಂದು ಕನಕದಾಸರು ತಮ್ಮ ದಾಸಸಾಹಿತ್ಯ, ಕೀರ್ತನೆ, ಭಜನೆಗಳ ಮೂಲಕ ವಿಶ್ವಕ್ಕೆ ಸಾರಿದ ಮಹಾನ್ ಮಾನವತಾವಾದಿ ಎಂದು ಪ್ರತಿಪಾದಿಸಿದರು.


ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಮಾತನಾಡಿ ೧೯೩೨ರ ಬಳಿಕ ಜಾತಿವಾರು ಜನಗಣತಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಈ ವರದಿಯನ್ನು ತಕ್ಷಣಕ್ಕೆ ಬಹಿರಂಗಪಡಿಸಬೇಕು 


ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಬುದ್ಧ, ಬಸವ, ಕನಕದಾಸರ ತತ್ವಾದರ್ಶಗಳನ್ನು ಅಳವಡಿಸಲಾಗಿದ್ದು, ಈ ಪೈಕಿ ಕನಕದಾಸರ ತತ್ವಾದಶಗಳು ಬಹುಪಾಲ ಅಡಕವಾಗಿವೆ ಎಂದ ಅವರು, ಹಾಲುಮತ-ಗಂಗಾಮತ ಸಮುದಾಯಗಳೆರಡೂ ಆವಿನಾಭಾವ ಸಂಬಂಧವಿದೆ. ಅವರೆಡ್ಡು ಪರಸ್ಪರ ಸಂಘಟಿತರಾಗಿ ಒಗ್ಗೂಡಿದರೆ ಇಡೀ ರಾಜ್ಯ ಆಳ್ವಿಕೆ ಮಾಡುವ ಶಕ್ತಿಯಿದೆ ಎಂದು ಬಣ್ಣಿಸಿದರು.


ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಶರಥ ಮೇತ್ರೆ ವಿಶೇಷ ಉಪನ್ಯಾಸ ನೀಡಿದರು. ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು.

ಕವಲಗಾ(ಬಿ)ಯ ಬೀರಣ್ಣ ದೇವರು, ಕಲಬುರಗಿಯ ಲಿಂಗದೇವರು, ಗವಿಸಿದ್ಧಪ್ಪ ಮುತ್ತಾö್ಯ, ಮೇಳಕುಂದಾದ ಮಹಾದೇವಪ್ಪ ಮುತ್ತಾö್ಯ ಸಾನ್ನಿಧ್ಯವಹಿಸಿದ್ದರು. 


ವೇದಿಕೆಯಲ್ಲಿ ಎಂಎಲ್‌ಸಿ ಶಶೀಲ್ ಜಿ. ನಮೋಶಿ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕುರುಬ ಸಮಾಜದ ಮುಖಂಡ ಬೈಲಪ್ಪ ನೇಲೋಗಿ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು. 


ಪ್ರದೇಶ ಕುರುಬ ಗೊಂಡ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ನಗರೇಶ್ವರ ಶಾಲೆಯಿಂದ ಡಾ. ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಆಕರ್ಷಕ ಒಂಟೆಗಳ ಮೆರವಣಿಗೆಗೆ ಮೆರಗುತಂದಿತ್ತು.

Post a Comment

Whatsapp Button works on Mobile Device only