Clickable Image

Wednesday, November 15, 2023

ಮಾದರ ಚೆನ್ನಯ್ಯ ನವರ 973ನೇ ಜಯಂತಿಯ ಪೂರ್ವ ಭಾವಿ ಸಭೆ :....



ಶಹಾಬಾದ : - ನಗರದಲ್ಲಿ ಡಿಸೆಂಬರ 26 ರಂದು ಕಾಯಕ ಶಿವಶರಣ ಮಾದರ ಚೆನ್ನಯ್ಯ ನವರ 973ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ದಲಿತ ಮಾದಿಗ ಸಮನ್ವಯ ಸಮಿತಿಯ ತಾಲೂಕ ಅಧ್ಯಕ್ಷರಾದ ಶಿವರಾಜ ಕೋರಿ ಹೇಳಿದರು.


ಅವರು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿಯರು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. 


ನಗರದಲ್ಲಿ ಡಿ. 26 ರಂದು ಬೆಳಗ್ಗೆ 11ಕ್ಕೆ ಮಾದರ ಚೆನ್ನಯ್ಯ ನವರ ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು, ಮಾದರ ಚೆನ್ನಯ್ಯ ಬಡಾವಣೆಯಿಂದ ವೇದಿಕೆಯ ವರೆಗೂ ಕಲಾ ತಂಡಗಳಿಂದ ಮೆರವಣಿಗೆ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದ ಡಿಎಮಎಸಎಸ ಪದಾಧಿಕಾರಿಗಳು ಹಾಗೂ ಸಮಾಜದ ಬಾಂಧವರಿಗೆ ಭಾಗವಹಿಸಲು ತಿಳಿಸಿದರು.


ಬಸವಾದಿ ಶರಣರ ಹಾಗೆ ಆಹ್ವಾನ ಪತ್ರಿಕೆ ಮುದ್ರಿಸಿ, ಗಣ್ಯರನ್ನು ಆಹ್ವಾನಿಸಲಾಗುವುದು. ಜಯಂತಿ ಅಂಗವಾಗಿ ಅಂದು ಮಾದರ ಚೆನ್ನಯ್ಯ ಬಡಾವಣೆಯ ಚೆನ್ನಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ವಚನಗಳ ಕುರಿತು ಗೀತಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಕಾಯಕ ಶಿವಶರಣರ ಆದರ್ಶ, ಚಿಂತನೆ ಹಾಗೂ ಸಮಾಜಕ್ಕೆ ಅವರ ಕೊಡುಗೆ ತಿಳಿಸುವ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.


ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರವಿ ಬೆಳಮಗಿ, ಸಂ. ಕಾರ್ಯದರ್ಶಿ ನಾಗಪ್ಪ ರಾಯಚೂರಕರ, ಯಲ್ಲಾಲಿಂಗ ಹೈಯಾಳಕರ, ಶಿವರಾಜ ಜೀನಕೇರಿ, ಭೀಮರಾಯ ಕನಗನಳ್ಳಿ, ಮಹೇಶ ಕಾಂಬಳೆ, ಮಹೇಶ ಹಲಕಟ್ಟಿ ಉಪಸ್ಥಿತರಿದ್ದರು.

Post a Comment

Whatsapp Button works on Mobile Device only