Clickable Image

Saturday, December 9, 2023

ಖರ್ಗೆ ಕುಟುಂಬದ ವಿರುದ್ಧ ಮಾತನಾಡುವುದು ನಿಲ್ಲಿಸಿದರೆ ನಿಗಮ ಮಂಡಳಿ ಸ್ಥಾನ ಮಣಿಕಂಠ ರಾಠೋಡ್ ಗೆ ಬಿಗ್ ಆಫರ್..

 ಎಐಸಿಸಿ ಅಧ್ಯಕ್ಷ ಡಾ: ಮಲ್ಲಿಕಾರ್ಜುನ್ ಖರ್ಗೆ ಕುಟುಂಬದ ವಿರುದ್ಧ ಮಾತನಾಡುವುದು ನಿಲ್ಲಿಸಿದರೆ ನಿಮ್ಮ ಮಗನಿಗೆ ನಿಗಮ ಮಂಡಳಿ ಜೊತೆಗೆ 15ರಿಂದ 20 ಕೋಟಿ ರೂಪಾಯಿ ಕೊಡಿಸುತ್ತೇನೆ ಎಂದು ನರೇಂದ್ರ ರಾಥೋಡ್ ಜೊತೆಗೆ ಮಾಜಿ ಸಚಿವ ಬಾಬುರಾವ್ ಚುಂಚನಸೂರ್ ಮಾತನಾಡಿದ್ದಾರೆ ಎನಲಾದ ಆಡಿಯೋವನ್ನು ಬಿಜೆಪಿ ಮುಖಂಡ ಮಣಿಕಂಠ ಬಿಡುಗಡೆ ಮಾಡಿದ್ದಾರೆ. ನರೇಂದ್ರ ರಾಥೋಡ್ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ತಂದೆಯಾಗಿದ್ದು ಅವರೊಂದಿಗೆ ಚುಂಚೂನ್ಸೂರ್ ಮಾತನಾಡಿದ ಇಪ್ಪತ್ತು ಸೆಕೆಂಡ್ ಆಡಿಯೋ ಸಿಕ್ಕಿದೆ, ನಿಮ್ಮ ಮಗನಿಗೆ ಹೇಳಿರಿ ಇದುವರೆಗೆ 15 ರಿಂದ 20 ಕೋಟಿ ಖರ್ಚು ಮಾಡಿದ್ದಾನೆ, ಈ ಬಗ್ಗೆ ಖರ್ಗೆ ಪ್ರಿಯಾಂಕ್ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಹೇಳುತ್ತೇನೆ ಅವರಿಗೆ ದೊಡ್ಡ ಚೇರ್ಮನ್ ಹುದ್ದೆ ಕೊಡಿಸುತ್ತೇನೆ ಎಂದು ಮಾತನಾಡಿರುವ ಆಡಿಯೋ ಬಿಡುಗಡೆಗೊಳಿಸಿದ್ದಾರೆ, ಚಿಂಚನಸುರ್ ಮೂಲಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಕಾಂಗ್ರೆಸ್ ಗೆ ಬರುವಂತೆ ಆಮಿಷ ಒಡ್ಡಿದ್ದರು ಎಂದು ಮಣಿಕಂಠ ಆರೋಪಿಸಿದ್ದಾರೆ.


Post a Comment

Whatsapp Button works on Mobile Device only