Clickable Image

Saturday, November 18, 2023

ಓಂ ಪತ್ತಿನ ಸಹಕಾರ ಸಂಘ ನಿ. 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ



ಶಹಾಬಾದ: ಪಟ್ಟಣದ ಓಂ ಪತ್ತಿನ ಸಹಕಾರ ಸಂಘ ನಿ.


ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಜಿಲ್ಲಾ ಸಹಕಾರ ಒಕ್ಕೂಟ ನಿ., ಕಲಬುರಗಿ -ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಹಾಗೂ ಓಂ ಪತ್ತಿನ ಸಹಕಾರ ಸಂಘ ನಿ. ಶಹಾಬಾದ ಸಂಯುಕ್ತ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಅಂಗವಾಗಿ ಸಾರ್ವಜನಿಕ -ಖಾಸಗಿ -ಸಹಕಾರಿ ಸಹಾಭಾಗಿತ್ವವನ್ನು ಬಲಪಡಿಸುವದು ವಿಷಯ ಕುರಿತು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರೆವೆರಿತ್ತು.


ಶರಣಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದ್ದರು, ಅಧ್ಯಕ್ಷತೆ ಬಸವರಾಜ ಮದ್ರಿಕಿ ವಹಿಸಿದ್ದರು. ಉಪನ್ಯಾಸ ಶ್ರೀಮತಿ ಮಂಜುಳಾ ಬಿರಾದಾರ ಉಪನ್ಯಾಸಕರು ಡಿಸಿಎಂ ತರಬೇತಿ ಕೇಂದ್ರ ಕಲಬುರಗಿ ನಿರ್ವಸಿದರು,ಮುಖ್ಯ ಅತಿಥಿಗಳಾಗಿ ಎಸ್. ಜಿ. ರಾಮಚಂದ್ರ, NCUI ಪ್ರೊಜೆಕ್ಟ ಆಫಿಸರ್, ಶ್ರೀಮತಿ ಶೈಲಜಾ ಆರ್ ಚವಾಣ್ ಮುಖ್ಯ ಕಾರ್ಯನಿರ್ವಾಹಣಾಧಿ ಕಲಬುರಗಿ ಜಿಲ್ಲಾ ಸಹಕಾರ ಒಕ್ಕೂಟ ನಿ., ರಾಮಣ್ಣ ಎಸ್ ಇಬ್ರಾಹಿಂಪುರ್,ಮುಖ್ಯ ಕಾರ್ಯನಿರ್ವಾಣಾಧಿಕಾರಿ ಓಂ ಪತ್ತಿನ ಸಹಕಾರ ಸಂಘ ನಿ ಶಹಾಬಾದ ವೇದಿಕೆ ಮೇಲಿದ್ದರು, ಸಂಘದ ನಿರ್ದೇಶಕರಾದ ಶ್ರೀಮತಿ ರೇಷ್ಮಾ ಸುಭೆದಾರ್, ವಿಜಯಕುಮಾರ್ ಕಂಟಿಕಾರ್, ತೇಜಸ್ ಆರ್, ಶ್ರೀಮತಿ ಮೇಘಾ ಎಸ್ ಸುಬೆದಾರ್, ತಿಪ್ಪಣ್ಣ ಹೆಡಗಿಮದ್ರಿ, ರವಿ ದೇವಕರ್, ಇಸ್ಮಾಯಿಲಬೀ, ಭೀಮರಾಯ, ಮಂಜು ಇತರರು ಉಪಸ್ಥಿತರಿದ್ದರು.


ಕಲ್ಯಾಣ ಕರ್ನಾಟಕ ನ್ಯೂಸ್ ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ

Post a Comment

Whatsapp Button works on Mobile Device only